ಪುತ್ತೂರು: ಪೆರ್ಲಂಪಾಡಿ ನಿವಾಸಿ ಸೌದಿ ಅರೇಬಿಯಾದಲ್ಲಿ ನಿಧನ

ಪುತ್ತೂರು: ಪೆರ್ಲಂಪಾಡಿ ಚಾಲೆಪಡ್ಪು ನಿವಾಸಿ ಸುಬ್ರಹ್ಮಣ್ಯ (25 ವ.) ರವರು ಸೌದಿ ಅರೇಬಿಯಾದಲ್ಲಿ ತೌಸಿಕ್ ಸೆಂಟ್ರಲ್ ಹಾಸ್ಪಿಟಲ್ ನಲ್ಲಿ ಎ.10 ರಂದು ನಿಧನಹೊಂದಿದರು.
ಚಾಲೆಪಡ್ಪು ರಾದಾಕೃಷ್ಣ ಪುಜಾರಿರವರ ಪುತ್ರರಾದ ಇವರು 2011ರ ದಶಂಬರ್ 1ರಂದು ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಅಲ್ಲಿ ವಿದ್ಯುತ್ ಅಘಾತಕ್ಕೊಳಗಾದ ಇವರು ಸೆಂಟ್ರಲ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ ಇವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಾಯಿ ಶ್ರೀಮತಿ ರತಿ, ಸಹೋದರ ವೇಣುಗೋಪಾಲ, ಸಹೋದರಿ ಜಲಜಾಕ್ಷಿರವರನ್ನು ಅಗಲಿದ್ದಾರೆ.




