|

ಸಕಲೇಶಪುರ: ಬೆಳ್ಳೂರು ಮತ್ತು ಶೆಟ್ಟಿಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಸಕಲೇಶಪುರ: ತಾಲೂಕು ಅಡಳಿತದ ಕುಮ್ಮಕ್ಕಿನಿಂದ ಪಟ್ಟಬದ್ರ ಹಿತಾಸಕ್ತಿಗಳು ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದಾರೆಂದು ತಾಲೂಕಿನ ಬೆಳ್ಳೂರು ಮತ್ತು ಶೆಟ್ಟಿಹಳ್ಳಿ ಗ್ರಾಮಸ್ಥರು ಪಟ್ಟದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ತಾಲ್ಲೂಕು ಕಛೇರಿ ಎದರು ಕೆಲಕಾಲ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿ, ಉಪವಿಭಾಗದಿಕಾರಿ ಕಛೇರಿ ಎದರು ಧರಣಿವಡೆಸಿದರು.

ಮಕ್ಕಳು ಶಾಲೆಗೆ ಹೋಗಲು ಭಯ ಪಡುವಂತಹ ಪರಿಸ್ಥಿತಿ ಉಂಟಾಗಿದೆ. ದನಕರುಗಳು ತಿರುಗಾಡಲು ಅಗದಂತಹ ಸ್ಥಿತಿ, ಮನೆಯೊಳಗೆ ಎಲ್ಲಾ ವಸ್ತುಗಳು ಧೂಳಿನಿಣದ ಕೂಡಿದೆ, ಅಧಿಕಾರಿಗಳೊಂದಿಗೆ ನಮ್ಮ ಅಳಲನ್ನು ತೋರುಪಡಿಸಿದರೆ ಅಧಿಕಾರಿಗಳು ನಮ್ಮ ಮೇಲೆ ಇಲ್ಲಸಲ್ಲದ ಅರೋಪಗಳನ್ನು ಹೊರಿಸಿ ಪೋಲಿಸರಿಗೆ ದೂರು ನೀಡಿ ಬಂದಿಸುವುದಾಗಿ ಭೆದರಿಸುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು.

ಸುಮಾರು ೧೦ಕೋಟಿಗೂ  ರೂ. ಮೀರಿದ ಮರಳು ಈ ನದಿಯ ದಡದಲ್ಲಿ ಶೇಖರಣೆಯಾಗಿದೆ, ಇದು ಸರಕಾರಕ್ಕೆ ಸೇರಬೇಕು. ಆದರೆ, ಅಧಿಕಾರಿಗಳ ಕುಮ್ಮಕ್ಕಿನಿಂದ ಪಟ್ಟಭದ್ರ ಹಿತಾಶಕ್ತಿಗಳು ಅಕ್ರಮವಾಗಿ ಕಾನೂನು ಕಟ್ಟಲೆಗಳನ್ನು ಗಾಳಿಗೆ ತೂರಿ ಮರಳು ಸಾಗಾಟ ನಮಡೆಸುತ್ತಿದ್ದಾರೆ. ಕೂಡಲೆ ಸಂಭಂದ ಪಟ್ಟ ಅಧಿಕಾರಿಗಳು ಇವರ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ .ಗ್ರಾಪಂ ಸದಸ್ಯಪ್ರಸಾದ್ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷ ಕಿರಣ್, ದರ್ಮ, ಲಕ್ಷ್ಮೀ ಇನ್ನಿತರರು ಪಾಲ್ಗೊಂಡಿದ್ದರು.

————– ವಿಶ್ವ ಕನ್ನಡಿಗ ನ್ಯೂಸ್ ಈಗ www.vknews.in ನಲ್ಲೂ ಲಭ್ಯ ————–

Posted by on February 25 2012 12:51:23 AM. Filed under ಹಾಸನ. You can follow any responses to this entry through the RSS 2.0. Both comments and pings are currently closed.

Comments are closed

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಜನಪ್ರಿಯ ಸುದ್ದಿಗಳು

ದಿನವಹಿ ಸುದ್ದಿಗಳು

February 2012
S M T W T F S
« Jan   Mar »
 1234
567891011
12131415161718
19202122232425
26272829  

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************