Home » January 31st, 2012
Entries posted on “January, 2012”
ಇತ್ತಿಚೆಗೆ ಉಪ್ಪಿನಂಗಡಿಯಲ್ಲಿ ಕೋಮು ಪ್ರಚೊಧನಕಾರಿ ಭಾಷಣ ಮಾಡಿ ಕೋಮು ಗಲಭೆಗೆ ಕಾರಣರಾದ ಆರೆಸ್ಸೆಸ್ ನೇತಾರ ಕಲ್ಲಡ್ಕ ಪ್ರಭಾಕರ್ ಭಟ್ಟನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಂಡು ಹಾಗೂ ನಾಡಿನ ಸೌಹಾರ್ದತೆಯನ್ನು ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳು ತಯಾರಾಗಬೇಕೆಂದು ಕರ್ನಾಟಕ ಯುವಜನ ವೇದಿಕೆ ಯು.ಎ.ಇ. ಆಗ್ರಹಿಸಿದೆ. ಪೊಲೀಸರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಮತಿಯ ಭಾವನೆ ಕೆರಳಿಸುವ ಅಥವಾ ಕೋಮು ಸೌಹಾರ್ದತೆಯನ್ನು ಕೆಡಿಸುವ ಭಾಷಣವನ್ನು ಮಾಡಬಾರದೆಂದು ತಾಕೀತು ಮಾಡಿದ್ದರೂ ಕೂಡ ಅದನ್ನು ಲೆಕ್ಕಿಸದೆ ಕೋಮು ಪ್ರಚೊಧನಕಾರಿ ಭಾಷಣ [...]
January 31st, 2012 | Posted in ಗಲ್ಫ್ ಸುದ್ದಿಗಳು | Read More »
ಅಬುಧಾಬಿ: ಜ.31: ಮಂಜಿನ ಮಂದ ಬೆಳಕಿನ ಕಾರಣ ಬೆಳಿಗ್ಗಿನ ಜಾವ ಸುಮಾರು 3.20ಕ್ಕೆ ಡುಬ್ಲಿನ್ ಗೆ ನಿರ್ಗಮಿಸುತ್ತಿದ್ದಾಗ ರನ್ವೆಯ ಬದಿಯಲ್ಲಿದ್ದ ದೀಪಸ್ತಂಭಕ್ಕೆ ಡಿಕ್ಕಿ ಹೊಡೆದು ಅದೃಶಾವಶಾತ್ ಹೆಚ್ಚಿನ ದುರಂತದಿಂದ ಪಾರದ ಘಟನೆ ನಡೆದಿದೆ. ಇದರಿಂದ ತಕ್ಷಣವೇ ರನ್ವೇಯನ್ನು ಮುಚ್ಚಿದ ಪರಿಣಾಮ ಸಮಯಕ್ಕೆ ಸರಿಯಾಗಿ ಆಗಮಿಸುವ ಹಾಗೂ ನಿರ್ಗಮಿಸುವ ಹಲವು ವಿಮಾನಗಳು ತಮ್ಮ ಯಾನಗಳಲ್ಲಿ ವಿಳಂಬವಾದವು. ನಂತರ ನಿಲ್ದಾಣ ಸುರಕ್ಷಾತಂಡ ಪರಿಶೀಲಿಸಿದ ನಂತರ ಮುಚ್ಚಿದ ರನ್ವೆಯನ್ನು ಬೆಳಿಗ್ಗೆ 9.30ಕ್ಕೆ ತೆರವುಗೊಳಿಸಲಾಯಿತು. ಈ ಘಟನೆಯಿಂದ ಯಾರಿಗೂ ಗಾಯವಾಗಿಲ್ಲ. ಇದರಿಂದ ಪ್ರಯಾಣಿಕರಿಗೆ [...]
January 31st, 2012 | Posted in ಗಲ್ಫ್ ಸುದ್ದಿಗಳು | Read More »
ಕೋಝಿಕ್ಕೋಡ್ ( ಕೇರಳ) : ಭಾರತದ ತೀಡ ದೊಡ್ಡ ಮಸೀದಿಗೆ ನಿನ್ನೆ ಕೇರಳದ ಕೋಝಿಕ್ಕೋಡ್ ನಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಅಖಿಲ ಭಾರತ ಸುನ್ನೀ ಜಂಇಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಖಮರುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಈ ಮಸೀದಿಯನ್ನು ನಿರ್ಮಿಸುವ ಕಾರ್ಯ ನಡೆಯಲಿದ್ದು ಹದಿನೆಂಟು ತಿಂಗಳಿನಲ್ಲಿ ಮಸೀದಿ ಉದ್ಘಾಟನೆಗೆ ಸಿದ್ಧವಾಗಲಿದೆ . ನಲವತ್ತು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಶಹರೇ ಮುಬಾರಕ್ ಮಸ್ಜಿದ್ ಇಪ್ಪತ್ತೈದು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಸುಮಾರು ನಲವತ್ತು [...]
January 31st, 2012 | Posted in ರಾಷ್ಟ್ರೀಯ ಸುದ್ದಿಗಳು | Read More »
ಮುಂಬಯಿ; ಹಿಂದಿ ಚಲನ ಚಿತ್ರ ನಿರ್ದೇಶಕಿ ಫರಾಃ ಖಾನ್ ಪತಿ, ಮಂಗಳೂರು ಮೂಲದ ಶಿರೀಷ್ ಕುಂದರ್ ಗೆ ಮುನ್ನಾ ಭಾಯಿ ಸಂಜಯ್ ದತ್ ಏರ್ಪಡಿಸಿದ ಔತನ ಕೂಟವೊಂದರಲ್ಲಿ ಬಾಲಿವುಡ್ ಬಾದಶಃ ಶಾರುಕ್ ಖಾನ್ ಕಪಾಳಮೋಕ್ಷ ಮಾಡಿರುವ ಆರೋಪಗಳು ಕೇಳಿಬರುತ್ತಿದೆ. ಸಂಜಯ್ ದತ್ ಅಭಿನಯಿಸಿದ ಇತ್ತೀಚಿಗೆ ಬಿಡುಗಡೆಯಾಗಿ ಜನ ಮನ್ನಣೆಗೆ ಪಾತ್ರಾವಾದ ಚಿತ್ರ ಅಗ್ನಿ ಪಥ್ ಸೂಪರ್ ಹಿಟ್ ಆದ ಹಿನ್ನಲೆಯಲ್ಲಿ ಸಂಜೂ ಬಾಬ ತನ್ನ ನಿವಾಸದಲ್ಲಿ ಅದ್ಧೂರಿಯಾಗಿ ಏರ್ಪಡಿಸಿದ ಈ ಔತಣ ಕೂಟದಲ್ಲಿ ಬಾಲಿವುಡ್ ನ ದಂಡೇ ಪಾಲ್ಗೊಂಡಿದ್ದರು. ಶಿರೀಷ್ ಕುಂದರ್ ಸ್ವಲ್ಪ [...]
January 31st, 2012 | Posted in ರಾಷ್ಟ್ರೀಯ ಸುದ್ದಿಗಳು | Read More »
ಸುಳ್ಯ ; ಮಾನ್ಯ ಮುಖ್ಯಮಂತ್ರಿಯವರಿಗೆ ಸರಕಾರ ನೀಡುವ ಹೆಲಿಕಾಫ್ಟರ್ ನಲ್ಲಿ ಸ್ಥಳಿಯರಿಬ್ಬರು ಹಾರಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಶನಿವಾರ ಸಂಜೆ ಮುಖ್ಯ ಮಂತ್ರಿ ವೇಣೂರು ಕಾರ್ಯಕ್ರಮ ಮುಗಿಸಿ ತನಗೆ ಸರಕಾರ ನೀಡಿದ ಹೆಲಿಕಾಫ್ಟರ್ ನಲ್ಲಿ ಸುಳ್ಯ ತಾಲೂಕಿನ ಪಂಜಕ್ಕೆ ಬರಬೇಕಿತ್ತು. ಪಂಜ ಜೂನಿಯರ್ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ ರಚಿಸಿ, ಶ್ವಾನ ದಳ, ಪೋಲಿಸ್ ಬೆಂಗಾವಲು , ಅಗ್ನಿಶಾಮಕ ದಳ ವಾಹನಗಳು ಅಲ್ಲದೆ ನಮ್ಮೂರಿನ ಮಂತ್ರಿಯ ಬರುವಿಕೆಯನ್ನು ಸಾವಿರಾರು ಜನ ಮೈದಾನದಲ್ಲಿ ಕಾದು ಕುಳಿತಿದ್ದರು. ವೇಣೂರು ಕಾರ್ಯಕ್ರಮ ಸ್ವಲ್ಪ ವಿಳಂಭವಾದುದರಿಂದ ಹೆಲಿಕಾಫ್ಟರ್ [...]
January 31st, 2012 | Posted in ದಕ್ಷಿಣ ಕನ್ನಡ | Read More »
ಪುತ್ತೂರು : ತಾಲೂಕಿನ ಮಾಡನ್ನೂರು ಜಮಾಅತಿಗೊಳಪಟ್ಟ ಕಾವು ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ ಹಾಗೂ ಮೀಲಾದುನ್ನೆಬಿ ಪ್ರಯಕ್ತ ಮಕ್ಕಳ ಕಾರ್ಯಕ್ರಮವು ದಿನಾಂಕ 09/02/2012 ಗುರುವಾರ ಮಗ್ರಿಬ್ ನಮಾಜ್ ಬಳಿಕ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ನಿನ್ನೆ (ಸೋಮವಾರ) ಹುಸೈನ್ ಹಾಜಿ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಶಾಫಿ ಹಾಜಿ ಪುಷ್ಪಕ್, ಬಿ.ಕೆ ಇಬ್ರಾಹಿಂ, ಉಮ್ಮರ್ ಮಿನಾರ್, ಮಾಹಿನ್ ಹಾಜಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಬದ್ರಿಯಾ ಜುಮಾ ಮಸೀದಿ ಖತೀಬರಾದ ಮುಹಮ್ಮದ್ ಹನೀಫ್ [...]
January 31st, 2012 | Posted in ದಕ್ಷಿಣ ಕನ್ನಡ | Read More »
ಬೆಂಗಳೂರು: ಹಲಸೂರುಗೇಟ್ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಂಜುಮಾಲಾ ಟಿ. ನಾಯಕ್ ಮೇಲೆ ಹಲ್ಲೆ ನಡೆಸಿದ್ದ ಐಎಎಸ್ ಅಧಿಕಾರಿ ಪಂಕಜ್ಕುಮಾರ್ ಪಾಂಡೆ ಪತ್ನಿ ಅನುಜಾ ಪಾಂಡೆ ಅವರನ್ನು ಕಬ್ಬನ್ಪಾರ್ಕ್ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಅಂಜುಮಾಲಾ ಮೇಲೆ ಹಲ್ಲೆ ನಡೆಸಿದ್ದ ಅನುಜಾ ಘಟನೆ ನಂತರ ತಲೆಮರೆಸಿಕೊಂಡಿದ್ದರು. ಅವರು ಕೋರಮಂಗಲದ ಸಂಬಂಧಿಕರ ಮನೆಯ್ಲ್ಲಲಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ರಾತ್ರಿ ಏಳು ಗಂಟೆ ಸುಮಾರಿಗೆ ಬಂಧಿಸಿದರು. ನಂತರ ಎಂಟನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದರು. ವಿಚಾರಣೆ [...]
January 31st, 2012 | Posted in ರಾಜ್ಯ ಸುದ್ದಿಗಳು | Read More »
ಬೆಂಗಳೂರು : ಕೋಮು ಸೌಹಾರ್ದತೆ ಕದಡುತ್ತಿರುವ ಆರ್ ಎಸ್ ಎಸ್ ನ್ನು ತಕ್ಷಣವೇ ನಿಷೆದಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಬ್ಯಾಟರಾಯನಪುರ ಅಸ್ಸೆಂಬ್ಲಿ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕುಮಾರಣ್ಣ ಈಗಿನ ಸರಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವೈಫಲ್ಯಗಳನ್ನು ಅನುಭವಿಸುತ್ತಿರುವ ಈ ಸರಕಾರ ವೈಫಲ್ಯಗಳ ಆಗರವಾಗಿದೆ ಅವರ ವೈಫಲ್ಯಗಳನ್ನು ಮರೆಮಾಚುವ ಸಲುವಾಗಿ ಜನರ ಮನಸ್ಸು ಬೇರೆಡೆಗೆ ತಿರುಗಿಸುವ ನಿಟ್ಟಿನಿಂದ ಕೋಮುವಾದಿ ಚಿಂತನೆಗಳನ್ನು ತೀವ್ರಗೊಳಿಸುತ್ತಿದೆ ಎಂದು ಆರೋಪಿಸಿದರು. ಆರ್ ಎಸ್ ಎಸ್ ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು [...]
January 31st, 2012 | Posted in ರಾಜ್ಯ ಸುದ್ದಿಗಳು | Read More »
ಅಬುಧಾಬಿ: ಕರ್ನಾಟಕ ಎಸ್.ವಯ್.ಎಸ್ ಅಬುಧಾಬಿಯ ವತಿಯಿಂದ “ಅಹ್ಲನ್ ಯಾ ರಬೀಹ್ ಹಾಗು 63 ನೇ ಭಾರತ ಗಣರಾಜ್ಯೋತ್ಸವ” ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಝಿಯಾನಿ ಅರಬ್ ಉಡುಪಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಜರುಗಿತು. ಮೌಲಿದ್ ಪಾರಾಯಣದ ಬಳಿಕ ಆರಂಭವಾದ ವೈವಿಧ್ಯಮಯವಾದ ಕಾರ್ಯಕ್ರಮಗಳ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಎಸ್.ವಯ್.ಎಸ್ ಅಬುಧಾಬಿಯ ನೂತನ ಅಧ್ಯಕ್ಷ ಹಾಜಿ ಶೇಕ್ ಬಾವ ಮಂಗಳೂರುರವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇರಳ ರಾಜ್ಯ ಎಸ್.ಎಸ್.ಎಫ್ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಪರಪ್ಪ ರವರು ಕರ್ನಾಟಕ ಎಸ್.ವಯ್.ಎಸ್ [...]
January 31st, 2012 | Posted in ಗಲ್ಫ್ ಸುದ್ದಿಗಳು | Read More »
ವಿಟ್ಲ : ಭ್ರಷ್ಟಾಚಾರ ರಾಷ್ಟ್ರ ವ್ಯಾಪಿಯಾಗಿದ್ದು, ಇದನ್ನು ಸಾಮಾಜಿಕ ಮೌಲ್ಯಗಳ ವರ್ದನೆಯ ಮೂಲಕ ನಿವಾರಿಸಹುದು ಎಂದು ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯಾನಂದ ಪೆರಾಜೆ ಅಭಿಪ್ರಾಯಪಟ್ಟರು. ಅವರು ವಿಟ್ಲಪಡ್ನೂರು ಗ್ರಾಮದ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಭ್ರಷ್ಟಾಚಾರ ಬಗ್ಗೆ ಜಾಗೃತಿ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಇಲ್ಲಿನ ಗ್ರಾ.ಪಂ. ಕಛೇರಿ ಸಭಾಂಗಣದಲ್ಲಿ ನಡೆದ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವ್ಯವಸ್ಥೆ ಮತ್ತು ಅವ್ಯವಸ್ಥೆಯೇ ಭ್ರಷ್ಟಾಚಾರದ ಮೂಲವಾಗಿದ್ದು, ಅತಿಯಾಸೆ ಮತ್ತು ದುರಾಸೆ ಇದಕ್ಕೆ ಕಾರಣವಾಗಿದೆ. ಆದ್ದರಿಂದ [...]
January 31st, 2012 | Posted in ದಕ್ಷಿಣ ಕನ್ನಡ | Read More »